ಧಗ ಧಗನೆ ಹೊತ್ತಿ ಉರಿಯುವ
ಈ ನಾಡಿನಲ್ಲಿ ,ಆ ಬೆಂಕಿಯ
ಆರಿಸುವವರು ಯಾರಿಹರು ಇಲ್ಲಿ......
ಒಂದೆಡೆ ಭಯೋತ್ಪಾದನೆ ..
ಇನ್ನೊಂದೆಡೆ ರಾಜಕೀಯ ..
ಇವೆರಡರ ನಡುವೆ ಇರುವ
ನಮ್ಮ ದೇಶವ ರಕ್ಷಿಸುವರ್ಯಾರು ........
ಕೊಲೆ-ಸುಲಿಗೆ-ವಂಚನೆ
ಅತ್ಯಾಚಾರ-ಅನಾಚಾರ
ಇವೆಲ್ಲದರ ನಡುವೆ ಇರುವ
ಜನರಿಗೆ ಸ್ಥಾನವೆಲ್ಲಿದೆ ......?
ಜನತೆಯಂತೆ ಕಾಡು ಪ್ರಾಣಿಗಳಿಗೂ
ಸಹ ಜಾಗವಿಲ್ಲದಂತಾಗಿದೆ
ಇಡೀ ಜಗವೇ ದುಷ್ಟರಿಂದ ಕೂಡಿದೆ
ಇದರ ರಕ್ಷಣೆ ಯಾರದ್ದಾಗಿದೆ .......?
ಗ್ರಾಮ- ಗ್ರಾಮವೇ ಹೊತ್ತಿ ಉರಿದರೂ
ಅದರ ಗೊಡವೆಯೇ ಬೇಡ ಎಂದು
ಸುಮ್ಮನೆ ಇರುವ ಜನಗಳೇ,ಏಳಿ
ಎದ್ದೇಳಿ ನಮ್ಮ ದೇಶವ ರಕ್ಷಿಸೋಣ ........