Thursday, September 23, 2010

ಕಾಡಗರ್ಭದೊಳಗೊಮ್ಮೆ ...........

ಕಾಡಕಡಿಯ ಬೇಡ ಓ ಮನುಜ
ಕಡಿದರೆ ಮುಗಿಯಿತು ನಿನ್ನ ಜನುಮ
ಕಾಡಿದ್ದರೆ ಎಲ್ಲೆಲ್ಲಿಯೂ ಹಸಿರು
ಅದರಲ್ಲಿಯೇ ಇಹುದು ಎಲ್ಲರ ಉಸಿರು ....

ನಮ್ಮಂತೆಯೇ ಅಲ್ಲವೇ
ಅವುಗಳೂ ಕೂಡ,ಜೀವವಿದೆ
ಜೀವನವಿದೆ-ಸಹಬಾಳ್ವೆ ಇದೆ
ಏನೆಲ್ಲ ಇದೆ ಆ ಕಾಡ ಗರ್ಭದೊಳಗೆ !!!!!!!!!!

ಕಾಡಿದ್ದರೆ ತಾನೇ ಹಸಿರು -ಉಸಿರು ಎಲ್ಲ
ಹಕ್ಕಿಗಳ ಚಿಲಿಪಿಲಿ ನಿನಾದವೆಲ್ಲ
ವರುಷ ವರುಷವೂ ಬೇಕು ಮಳೆ ..
ಮಳೆಯಿಂದ ಬೆಳೆ,ಅದರಿಂದಲೇ ಜೀವನ ....

ಭೂಮಿಗೆ ತಂಪೆರೆಯಲು ಬೇಕು
ಕಾಡು ,ಅದುವೇ ತಂಪಿನ ಬೀಡು
ಕಾಡನ್ನು ಕಡಿದರೆ ಆಗುವುದು
ನಮ್ಮಯ ಭೂಮಿಯು ಬರಡು.............

Tuesday, August 24, 2010

ಬಾಳಿನ ಬಂಡಿ

ಬದುಕೆಂಬ ಈ ಬೆಂಗಾಡಿನಲಿ
ನಾವು ನೀವು ಇನ್ನೆಷ್ಟು ದಿನ .......


                                 ಇಂದು ಇರುವವರು ನಾಳೆ ಇಲ್ಲ
                                  ಎಲ್ಲರೂ ಒಂದು ದಿನ ಹೋಗಲೇ ಬೇಕಲ್ಲ
                                  ಇರುವ ನಾಲ್ಕು ದಿನಗಳ ಈ ಬಾಳಲ್ಲಿ
                                   ಸುಖ ದುಃಖಗಳೇ ಮುಖ್ಯ


ಹೋದ ಮೇಲೆ ಕಣ್ಣೀರೇಕೆ............?
ಇದ್ದ ದಿನಗಳ ನೆನೆಯಬೇಕು
ಜೀವನವೆಂಬ ಸಾಗರದಲ್ಲಿ
ಈಜ ಬೇಕು ..ಇದ್ದು ಜಯಿಸಬೇಕು

                                            
                                   ಮುಂದಿನ ದಿನಗಳಲ್ಲಿ ಈ
                                   ಬಾಳೆಂಬ ರಥವನ್ನು ಎಳೆಯುವರಾರು......?
                                   ಸಾಕು ಮಾಡಯ್ಯ ಹೇ ದೇವನೇ
                                   ನೀನು ಆಡಿಸುವ ಆಟವ......          

Tuesday, August 3, 2010

ಮಳೆರಾಯನೊಂದಿಗೆ

ಜಿನುಗುತಿರುವ ಮಳೆಹನಿಯಲ್ಲಿ
ನೀ ಬರುವುದು ಕಂಡೆ
ನೀನು ನೆನೆಯುವೆ ಎಂದು
ಛತ್ರಿಯ ಹಿಡಿದುಕೊಂಡೆ.

ಆ ಮಳೆಹನಿಯೊಂದಿಗೆ ಕಳುಹಿಸಿದೆ
ನನ್ನ ಪ್ರೀತಿಯ ಸಿಹಿ ಮುತ್ತೊಂದನ್ನು
ಅದು ಸಿಕ್ಕ ನಂತರ ನೀ
ಕೇಳಿದೆ ಕೊಡು ಮತ್ತೊಂದು ಮುತ್ತೊಂದನ್ನು.